ಭಾರತಕ್ಕೆ ನಿರ್ಭಯಾಳ ಪತ್ರ

ಇಂಡಿಯಾ ನಿನ್ನ ಅಜ್ಞಾನ ನೋಡಿ ದುಃಖ ಪಟ್ಟಿದೀನಿ,ನಿನ್ನ ಕಾನೂನು ನೋಡಿ ಬೇಸತ್ತುಹೋಗಿದಿನಿ, ನಿನ್ನ ಜನರನ್ನ ನೋಡಿ ಭಯಪಟ್ಟಿದೀನಿ, ಈ ಭಯ ಬರೀ ನನ್ನದಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ಯುವತಿಯ ಭಯ. ಕಡೆದಾಗಿ ನಿನಗೊಂದು ಮಾತು ಹೇಳೋದಕ್ಕೆ ಇಷ್ಟಪಡ್ತೀನಿ, ನಿನ್ನ ಮಕ್ಳ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆದಿದೆ,ದಯಮಾಡಿ ಇನ್ನಾದ್ರೂ ಎಚ್ಛೆತ್ಕೋ, ಕಾಲ ಮೀರಿ ಹೋಗಿದೆ ಅಂತ ನನಿಗೆ ಗೊತ್ತು, ಆದ್ರೂ ನೀನು  ಎಚ್ಛೆತ್ಕೋತಿಯಾ ಅಂತ ಹೇಳ್ತಿದೀನಿ. ಸ್ವರ್ಗದಲ್ಲಿ already ತುಂಬಾ ಜನರನ್ನ ಕಳ್ಸಿದೀಯಾ ಇಲ್ಲಿ ತುಂಬಾ over crowd ಆದ್ರೆ, ಕೆಲವೊಂದಿಷ್ಟು ಜನರನ್ನ ನಾನು ಭೂಮಿಗೆ ನಿನ್ನ ಮಗಳ ರೂಪದಲ್ಲಿ,ಸೋದರಿ ರೂಪದಲ್ಲಿ, ತಾಯಿ ರೂಪದಲ್ಲಿ ವಾಪಸ್ ಕಳಸ್ತೀನಿ, ಇವರನ್ನಾದ್ರೂ ಚೆನ್ನಾಗಿ ನೋಡ್ಕೋ, ಇಲ್ಲಾ ಅವರು ನಿನ್ನ ಕಣ್ಣೆದುರಿಗೆ ಅತ್ಯಾಚಾರಕ್ಕೊಳಗಾದ್ರೆ ನೀನು ಬದಲಾಗಬೇಕಂತ ಆಗ ನಿನಗರಿವಾಗುತ್ತದೆ.

ಭಾರತಕ್ಕೆ ನಿರ್ಭಯಾಳ ಪತ್ರ Read More »

ಹುಡುಕಾಟವೇನೆ ಜೀವನ!?

ಪ್ರಶ್ನೆ ಎಂದರೆ ಅದಕ್ಕೊಂದು ಉತ್ತರವಿರಲೇಬೇಕೇ? ಹಾಗಾದರೆ ಉತ್ತರ ಸಿಗದ ಪ್ರಶ್ನೆಗಳೇ ಇಲ್ಲವೇ? ಉತ್ತರ ಸಿಗದ ಅದೆಷ್ಟೋ ಪ್ರಶ್ನೆಗಳು ಈ ಭೂಮಿಯಲ್ಲಿ ನಿಗೂಢವಾಗಿ ಅಡಗಿವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲದಿದ್ದರೂ, ಉತ್ತರಕ್ಕೆ ಹತ್ತಿರವೆನಿಸುವ, ಉತ್ತರ ರೂಪದ ಉತ್ತರ ಸಿಗಬಹುದು, ಸಿಗದೆಯೂ ಇರಬಹುದು. ಇಂತಹ ಅತ್ಯಪರೂಪದ ಪ್ರಶ್ನೆ “ಬದುಕು” ಎಂದರೆ ಬಹುಶಹ ತಪ್ಪಾಗಲಾರದು.ಬದುಕೇ ಒಂದು ದೊಡ್ಡ ಪ್ರಶ್ನೆ, ಒಂದರ್ಥದಲ್ಲಿ Syllabus ಇಲ್ಲದೆ ಪರೀಕ್ಷೆ ಬರೆದ ಹಾಗೆ, ಈ ಪರೀಕ್ಷೆಯಲ್ಲಿ ಪೂರ್ವಭಾವಿ ಸಿದ್ಧತೆಗಳಿಲ್ಲ. ಜೀವನದುದ್ದಕ್ಕೂ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಸಾಗುವುದೇ ಜೀವನದ ವ್ಯಾಖ್ಯಾನ. ಒಂದು ರೀತಿ ಉತ್ತರ ಹುಡುಕುವುದೇ ಒಂದು ದೊಡ್ಡ ಸಾಧನೆ, ಉತ್ತರ ಸಿಕ್ಕಿತೂ ಎನ್ನುವ ಖಾತರಿಯೂ ಇರುವುದಿಲ್ಲ, ಒಂದು ವೇಳೆ ಉತ್ತರ ಸಿಕ್ಕರೂ, ಸಿಕ್ಕ ಉತ್ತರ ಸರಿಯಾಗಿರುವುದೆನ್ನುವುದು ಖಾತರಿಯಿರುವುದಿಲ್ಲ.ನಮಗೆ ಸಿಕ್ಕ ಉತ್ತರ ಎಲ್ಲರಿಗೂ ಸರಿ ಅನ್ನಿಸಬೇಕು ಅಂತಾನೂ ಇಲ್ಲ, ನನ್ನ ಉತ್ತರವೇ ಸರಿ ಎನ್ನುವ ಭ್ರಮೆಯಲ್ಲಿರುವುದೂ ಸರಿಯಲ್ಲ. ನಮಗೆ ಸಿಕ್ಕ ಉತ್ತರ ಮುಂದೊಂದು ದಿನ ತಪ್ಪಾಗಿರಬಹುದು ಮತ್ತು ನಮಗೆ ದೊರೆತ ಉತ್ತರದಿಂದ ನಾವು ಕೀರ್ತಿ ಮತ್ತು ಯಶಸ್ಸುಗಳನ್ನು ಪಡೆಯಲೂಬಹುದು. ಉತ್ತರ ಸರಿಯಿರಲಿ, ತಪ್ಪಿರಲಿ. ಸಿಗಲಿ, ಸಿಗದಿರಲಿ.ದಾರಿ ಸುಲಭದ್ದಾಗಿರಲಿ, ಕಠಿಣದ್ದಾಗಿರಲಿ. ಆದರೆ ಉತ್ತರ ಹುಡುಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಉತ್ತರ ಸುಲಭವಾಗಿ ದೊರೆಯುವುದೆಂದು ವಾಮಮಾರ್ಗ ಹಿಡಿಯಬಾರದು, ಉತ್ತರವನ್ನು ಅರಸುವ ಮಾರ್ಗ ಸನ್ಮಾರ್ಗದ್ದಾಗಿರಬೇಕು ಮತ್ತು ಶ್ರದ್ಧೆಯಿಂದ ಕೂಡಿರಬೇಕು. ಈ ರೀತಿ ಜೀವನದ ಹಲವು ಘಟ್ಟಗಳಲ್ಲಿ ಬಂದೊದಗಿದ ಪ್ರಶ್ನೆಗಳನ್ನು ಉತ್ತರಿಸುತ್ತಾ ಹೋದಾಗ ನಮ್ಮಲ್ಲಿನ ದ್ವಂದ್ವಗಳು ನಿವಾರಣೆಯಾಗುತ್ತವೆ.

ಹುಡುಕಾಟವೇನೆ ಜೀವನ!? Read More »

Ladki ki Awaz

ನನ್ನೊಳಗೆ ನಾನು

ಮನದೊಳಗೆ ತುಂಬಿದ ಕಸಿವಿಸಿ
ಹೊತ್ತಿಹುದು ಒಡಲ ಒಳಗೆ
ಭುಗಿಲೆದ್ದಿಹುದು ಬೆಂಕಿಯ ಜ್ವಾಲೆ
ಆದರೂ ಹೊರಹಾಕಲೊಲ್ಲದು ನಾಲಿಗೆ

ಈ ಲೋಕವ ಸುತ್ತೊಡೆದು ಬಂದಿಹೆ
ಎಲ್ಲೆಲ್ಲೂ ರೋದನದ ಮುಖುಟ ಮಾಲೆ
ಸತ್ಯವ ಆಘ್ರಾಣಿಸುವ ಶಕ್ತಿ ಪಡೆದಿರುವೆ
ಇದರ ಮುಂದೆ ನನದೇನೂ ಅಲ್ಲ, ಅಲ್ಲವೇ..!?

ನನ್ನೊಳಗೆ ನಾನು Read More »

ನನ್ನ ಪರಿಧಿ

ಸಂವೇದನೆ   ತುಂಬಿದ ಈ   ಭಾವಯಾನದಲ್ಲಿನಮ್ಮ   ಅಸ್ತಿತ್ವವೇ ಒಂದು   ಮೂಲ  ಮಂತ್ರವಾಗಿರಲಿ ಜೀವನದ   ಏಳುಬೀಳುಗಳ  ಸುಖ ದುಃಖಗಳ ಸರಿದೂಗಿಸಿ ನಡೆಯುವದೇ ದಾಂಪತ್ಯ

ನನ್ನ ಪರಿಧಿ Read More »

ನನ್ನ ಪರಿಧಿ

ನನ್ನ ಮೊದಲ ಗಜಲ್ ಕತ್ತಲಾದರೂ ಕಾಯುವೆ ನಾ ನಿನಗಾಗಿ ಉತ್ತರಕ್ಕಾಗಿ ಹುಡುಕುತ್ತಿರುವೆ ನಾ ನಿನಗಾಗಿ ಪ್ರೀತಿಯ ಜೇನಹನಿಯ ತಂದಿರುವೆ ಒಲವಿನ ಬತ್ತಳಿಕೆಯಿಂದ ನಾ ನಿನಗಾಗಿ ಆಕಾಶದ ಚುಕ್ಕಿಯ ಎಣಿಸುತ ಕಾಲಕಳೆದೆ ಆ ನೀರವ ರಾತ್ರಿಯಲಿ ನಾ ನಿನಗಾಗಿ ಮರೆತುಹೋದ ನೆನಪು ಮರಳಿ ಬಂದು ಬಳಲುತಿರುವೆ ನಾ ನಿನಗಾಗಿ ಬಂದು ಸೇರಿಕೊ ಎನ್ನ, ಸುಧೆಯ ಹರಿಸಲು ಕಾಯುತಿರುವೆ ನಾ ನಿನಗಾಗಿ ಸುಶಿ

ನನ್ನ ಪರಿಧಿ Read More »

ಬಯಕೆಗಳ ಪುನರ್ಜೀವ

ಬಯಕೆಗಳ ಪುನರ್ಜೀವ ಬಯಕೆಗಳ ಹೊತ್ತು ಬಾನಾಡಿಯಲ್ಲಿ ಬೆಳ್ಳಕ್ಕಿಯಾಗಿ ಹಾರುತಲಿರುವೆ ಕಾಣಲೊಲ್ಲದು ಎಲ್ಲೂ ಹಸಿರೆಲೆ ಕಾಡು-ಮೇಡು ವಿರಮಿಸಲು ಕೆಲಹೊತ್ತು ಬಯಕೆಗಳ ಮೂಟೆಯ ಅಲ್ಲೇ ಬಿಸುಟಾಗ ಕಂಡಿತೊಂದು ಮಾಯಾನಗರಿ ದೂರದಲ್ಲಿ ಪುಳಕಗೊಂಡ ಮನದಿ ಹತ್ತಿರ ಸುಳಿದಾಗ ನಿಂತಿದ್ದೆ ನಾನು ಬರಡು ಭುವಿಯಲ್ಲಿ! ಆದರೂ ಛಲ ಬಿಡದೆ ಎದ್ದು ನಿಂತೆ ನಾ ಕಾಣದ ಹಸಿರೆಲೆಯ ಅರಸಿ ಮತ್ತೆ ನಿಂದು ಕಣ್ಣ ತುಂಬ ಕನಸಾ ಹೊತ್ತು ನನ್ನೆಲ್ಲಾ ಶಕ್ತಿಯ ಮೀರಿ ಮತ್ತೆ ಮೇಲೇರಿದೆ ನಾ ಬಾನಾಡಿಯ ಬೆಳ್ಳಕ್ಕಿಯಾಗಿ ಹರ್ಷದಿ ಚೀರಿದೆ ಜಗತ್ತನ್ನು ಗೆಲ್ಲುವ

ಬಯಕೆಗಳ ಪುನರ್ಜೀವ Read More »

ಆದರ್ಶಪ್ರಾಯರು

ರಜನಿಯ ಮೊಬೈಲ್ ಫೋನ್ ರಿಂಗಣಿಸುತ್ತಿತ್ತು. ಅಡುಗೆ ಕೆಲಸದಲ್ಲಿ ಮುಳುಗಿ ಹೋಗಿದ್ದಳವಳು. “ಲೇ ರಜನಿ, ನಿನ್ನ ಗೆಳತಿ ಅಂಬಿಕಾ ಕಾಲ್” ಅನ್ನುತ್ತಾ ಮೊಬೈಲನ್ನು ರಜನಿಯ ಕೈಗಿತ್ತರು ಅವಳ ಗಂಡ ಸುಧಾಮ. ಕೈ ಒರೆಸಿಕೊಂಡು ಫೋನ್ ಕರೆ ಸ್ವೀಕರಿಸಿದ ರಜನಿ “ಏನೇ ಅಂಬಿಕಾ, ಇಷ್ಟು ಹೊತ್ತಿಗೆ ಕರೆ ಮಾಡಿದ್ದೀಯಾ?ಏನು ವಿಶೇಷ? ಮನೆಯಲ್ಲಿ ಎಲ್ಲರೂ ಸೌಖ್ಯ ತಾನೇ?” ಅಂತ ಕೇಳಲಾರಂಭಿಸಿದಳು. “ಒಂದೊಂದೇ ಪ್ರಶ್ನೆ ಕೇಳು ಮಾರಾಯ್ತಿ. ನೀನು ವಾಟ್ಸಾಪ್ ನೋಡುವುದೂ ಇಲ್ಲ. ನಾನು ನಿನ್ನೆ ಒಂದು ಹುಡುಗಿ ಫೋಟೋ ಕಳಿಸಿದ್ದೆ. ಫೋಟೋ

ಆದರ್ಶಪ್ರಾಯರು Read More »

ಜೀವಿಸಿಬಿಡು ಬದುಕಿದಷ್ಟು ದಿನ

ನಾವು ಯಾವಾಗಲೂ ಗುನುಗುವೆವು ಪಟ್ಟ ಕಷ್ಟಗಳ ಎಲ್ಲರ ಮುಂದೆ… ಇಂದಿನ ಸುಖವ ಮರೆತು!!!! ಮಾಳಿಗೆಯ ಮೇಲೆ ನಿಂತು ಯೋಚಿಸುವೆ ಏಕೆ? ಬರುವ ಗಾಳಿಯೂ ಕದ್ದು ನಾಲಿಗೆಯ ಚಾಚಿ ದಬ್ಬೀತು ಕೆಳಗೆ!!! ನಮಗಷ್ಟೆ ದೇವರಿತ್ತ ವರ ಇನ್ನೊಬ್ಬರಿಗೆ ಶಾಪ ಹಾಕುವುದ! ನೋಡಾ ನೊಂದು ಬೆಂದರೂ ಪ್ರಾಣಿಗಳು ಯಾವೊತ್ತೂ ಹಾಕಲಿಲ್ಲ ಶಾಪ!! ಭೂಮಿ ಈಗ ಸ್ವಚ್ಛಂದವಾಗಿ ಹಾಡುತಿದೆ ಯುಗಾದಿಯ ಹಾಡ!ಅದು ಮರೆತೆಹೋಯಿತು ಅನುಭವಿಸಿದ ಬರಗಾಲದ ದಿನಗಳ!!! ಪ್ರತಿ ಮರವೂ ಹೇಳುವುದು ಹೊಸ ಸಂಗೀತವ. ಏರುತಿದೆ ದಿಬ್ಬದ ಮೇಲೆ ಜಗದ ಪರಿವೆಯಿಲ್ಲದೇ

ಜೀವಿಸಿಬಿಡು ಬದುಕಿದಷ್ಟು ದಿನ Read More »

ನೆನಪು

ನೆನಪು…ಮಾಗಿಯ ಚಳಿಗೆಮಾಗಿದ ಹಣ್ಣೆಲೆಗಳುಉದುರಿ ಹಸಿಚಿಗುರುಚಿಗುರಿ ನಗುವದುಪ್ರಕೃತಿ ಸಹಜಪ್ರತಿ ದಿನ ನಿನ್ನನೆನಪಿನ ಬಳ್ಳಿ ಚಿಗುರಲುಬೇಕಿಲ್ಲ ಮೈಮನದ ಮಾಗುವಿಕೆಪ್ರೀತಿಯ ಒಸರೊಂದೇ ಸಾಕು

ನೆನಪು Read More »